ಮಂಜುಳಾ ಬರಿತಾರೆ... ಬುದ್ದನ ಹಾದಿಯಲ್ಲಿ
ನಗುವೇ ಕೊಲ್ಲುವ ಆಯುಧ
- ಮಂಜುಳ ಹುಲಿಕುಂಟೆ
ಸಾವಿನ ದಲ್ಲಾಳಿಗಳ ಮದ್ಯೆ
ನನ್ನ ನಗುವಿನ ಸಾವಾಗಿದೆ
ಸೂತಕದ ಮಡುವಿನಲ್ಲಿದೆ ಮನ
ಬಿಡುಗಡೆಯ ಬಾಗಿಲೂ ಮುಚ್ಚಿದೆ...
ನನ್ನ ನಗುವಿನ ಸಾವಾಗಿದೆ
ಸೂತಕದ ಮಡುವಿನಲ್ಲಿದೆ ಮನ
ಬಿಡುಗಡೆಯ ಬಾಗಿಲೂ ಮುಚ್ಚಿದೆ...
ಮತ್ತೆ ತುಂಬಿಕೊಳ್ಳಬೇಕಿದ ಅವನದೇ ನಗುವ
ಎದೆಯೊಳಗೆ......
ಎದೆಯೊಳಗೆ......
ಎಲ್ಲಿ ನೋಡಿದರು ಕ್ರೂರಿಗಳ ದಂಡು
ನಿಷ್ಕಲ್ಮಷ ನಗುವಿನ ಸುಳಿವಿಲ್ಲ
ಸಾವವ್ಯಾಪಾರಿಗಳ ನಡುವೆ ನಿಂತಿರುವೆ
ಅಸಹಾಯಕಳಾಗಿ ....
ನಿಷ್ಕಲ್ಮಷ ನಗುವಿನ ಸುಳಿವಿಲ್ಲ
ಸಾವವ್ಯಾಪಾರಿಗಳ ನಡುವೆ ನಿಂತಿರುವೆ
ಅಸಹಾಯಕಳಾಗಿ ....
ಸಾಕಾಗಿದೆ ಕೊಂದು ಖುಷಿ ಪಡುವವರ ಸಂಗ
ಬಂದುಬಿಡಲೇ ನಿನ್ನ ದಾರಿ ಇಡಿದು....
ದಾರಿ ತೋರುವೆಯಾ ಗುರುವೇ...
ಆತ್ಮಸಾಕ್ಷಿ ಬೇಡುವ ಅಹಿಂಸೆಯ ಕಾಪಿಟ್ಟುಕೊಳ್ಳಬೇಕಿದೆ...
ಬಂದುಬಿಡಲೇ ನಿನ್ನ ದಾರಿ ಇಡಿದು....
ದಾರಿ ತೋರುವೆಯಾ ಗುರುವೇ...
ಆತ್ಮಸಾಕ್ಷಿ ಬೇಡುವ ಅಹಿಂಸೆಯ ಕಾಪಿಟ್ಟುಕೊಳ್ಳಬೇಕಿದೆ...
ಇಡೀ ಧರೆಯೇ ರಕ್ತ ಹೀರುವುದರಲ್ಲಿ ತಲ್ಲೀನ
ಸಾವು...ಯಕಶ್ಚಿತ್ ಇಲ್ಲಿ
ನಗುವೇ ಕೊಲ್ಲುವ ಆಯುಧ
ಪ್ರೀತಿ ವಂಚನೆಯ ಹಾದಿ ಹಿಡಿದಿದೆ...
ಇಲ್ಲಿ ಪ್ರೀತಿಯಿಂದ ಗೆಲ್ಲುವುದು ಏನೂ ಉಳಿದಿಲ್ಲ.
ಸಾವು...ಯಕಶ್ಚಿತ್ ಇಲ್ಲಿ
ನಗುವೇ ಕೊಲ್ಲುವ ಆಯುಧ
ಪ್ರೀತಿ ವಂಚನೆಯ ಹಾದಿ ಹಿಡಿದಿದೆ...
ಇಲ್ಲಿ ಪ್ರೀತಿಯಿಂದ ಗೆಲ್ಲುವುದು ಏನೂ ಉಳಿದಿಲ್ಲ.


Comments
Post a Comment
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು